ಸೋಮವಾರ, ಡಿಸೆಂಬರ್ 23, 2013

ಅಸಾಮಾನ್ಯ ಅರವಿಂದ

ಕೊಟ್ಟ ಕುದುರೆಯ ಏರಲಾರದವ
ಶೂರನೂ ಅಲ್ಲ ಧೀರನೂ ಅಲ್ಲ
ಎಂದು ಜರಿದರು ಅಂದು
ಅಪವಿತ್ರ ಮೈತ್ರಿ ಎಂದು ಜರಿವರು ಇಂದು

ಜರಿವವರ ಜರಿಯಲು ಬಿಟ್ಟು
ಧೈರ್ಯದಿಂದ ಮುಂದಡಿಯಿಟ್ಟು
ಅಭಿವೃದ್ಧಿಪರ ಆಡಳಿತವನ್ನಿತ್ತು
ತೋರಿ ನಿಮ್ಮ ಕರಾಮತ್ತು

ಜನಲೋಕಪಾಲ ಜಾರಿಗೆ ತಂದು
ಜನಸಾಮಾನ್ಯರ ಮನವ ಗೆದ್ದು
ರಾಜಧಾನಿಯಲ್ಲಿ ರಾರಾಜಿಸಿರಿ
ಜನಜೀವನವ ಸುಧಾರಿಸಿರಿ

ಮಾದರಿ ರಾಜಕಾರಣಿ ಆಗಿ ನೀವು
ಪ್ರಗತಿ ಮಂತ್ರವ ಜಪಿಸುತ್ತ ಮರೆಸಿ ಜನರ ನೋವು
ಜಯಿಸಲಿ , ಜಗಮಗಿಸಲಿ ಜನಸಾಮಾನ್ಯ
ಉದಯಿಸಲಿ ಹೊಸದೊಂದು ರಾಮರಾಜ್ಯ
ಚಿತ್ರ ಕೃಪೆ : ಅಂತರ್ಜಾಲ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ