ಸೋಮವಾರ, ಮಾರ್ಚ್ 14, 2011

ಕುರುಡು


ಕಣ್ಣಿಲ್ಲದೇ ಕುರುಡನಾದ ಧೃತರಾಷ್ಟ್ರ
ಅವನದೇ ಭಾಗ್ಯ ನೋಡುವ ಭಯವಿಲ್ಲ
ತನ್ನೆದುರ "ಧೂರ್ತ ರಾಷ್ಟ್ರ"ವ


ಕಣ್ಣಿದ್ದೂ ಕುರುಡರು ನಾವು
ಕಂಡರೂ ಕಾಣದಂತೆ ಗಮ್ಮನೆ ಕುಳಿತಿಹೆವು ಸಹಿಸಿಕೊಳ್ಳುತ್ತಾ ಎಲ್ಲ ನೋವು


ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ
ಪ್ರಭುಗಳು ಹೇಳಿದ್ದೆ ಇಲ್ಲಿ ತತ್ವಸ್ವಾಮಿ ಇದು ಕಲಿಯುಗ - ಕಲಿಯುವುದು ಯಾವಾಗ!!??

ಬುಧವಾರ, ಮಾರ್ಚ್ 9, 2011

ವಿಶ್ವ ಕನ್ನಡ ಸಮ್ಮೇಳನ- ಕನ್ನಡಕ್ಕೆ ಅವಹೇಳನ

ನೋಡಲು ಮರೆಯದಿರಿ....ಮಾರ್ಚ್ ೧೧ ರಿಂದ ಅಮೋಘ ಪ್ರಾರಂಭ.......ವಿಶ್ವ ಕನ್ನಡ ಸಮ್ಮೇಳನ.......ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ಸೈಟನ್ನು ಸಂಪರ್ಕಿಸಿ......ಹೆದರಬೇಕಾಗಿಲ್ಲ....ಎಲ್ಲಾ ಮಾಹಿತಿಗಳೂ ಆಂಗ್ಲ ಭಾಷೆಯಲ್ಲಿ ಲಭ್ಯ...ಜೈ ಕರ್ನಾಟಕ....ಜೈ ಭುವನೇಶ್ವರಿ.......ನಮ್ಮ ಮಾನ್ಯ ಮುಖ್ಯಮಂತ್ರಿಗಳು ಈ ಕುರಿತು ಗಮನ ಹರಿಸಿದರೆ ತಾಯಿ ಭುವನೇಶ್ವರಿ ಧನ್ಯಳಾಗುತ್ತಾಳೆ.