ಶುಕ್ರವಾರ, ಜುಲೈ 30, 2010

ಗುಮ್ಮನಂಥ ಮನಸು



ಮಗುವಾಗು ಮಗುವಾಗು ಓ ಮನಸೇ ಮಗುವಾಗು
ನಗುವಾಗು ನಗುವಾಗು ಸವಿಯಾದ ನಗುವಾಗು
ಗುಮ್ಮನಂಥ ಈ ಮನದೆ ನೂರಾರು

ದೂರಾಲೋಚನೆ-ದುರಾಲೋಚನೆ


ಕ್ಷಣಚಿತ್ತ ಕ್ಷಣಪಿತ್ತ ಹೊಯ್ದಾಟ ಅತ್ತಿತ್ತ
ಎಂದು ಕೊನೆ ಇದಕೆ ಈ ಮನದ ತೊಳಲಾಟಕೆ
ಗುಮ್ಮನಂಥಾಗದಿರು ಮನವೇ

ನೀ ಮಗುವಾಗು.......ಮಗುವಾಗು.....ನಗುವಾಗು.....

ಮಂಗಳವಾರ, ಜುಲೈ 27, 2010

ನಾಡ ರಕ್ಷಣೆಯೋ ಇಲ್ಲ ಭಕ್ಷಣೆಯೋ !!!!!!????????


ಗೆಳೆಯರೇ,
ಕನ್ನಡ ನಾಡು ಕಂಡ ಹೆಮ್ಮೆಯ ಸಾಹಿತಿಗಳಾದ ಯು.ಆರ್.ಅನಂತ ಮೂರ್ತಿ, ಬರಗೂರು ರಾಮಚಂದ್ರಪ್ಪ ಇಂಥಹವರಿಗೂ ರಾಜಕೀಯದ ಗೀಳು ಹತ್ತಿದೆಯೆಂದರೆ ಈ ನಾಲ್ಕಕ್ಷರದ ಕ್ಷೇತ್ರಕ್ಕೆ ಎಷ್ಟೊಂದು ಮಹತ್ವ ಇದೆ ಎಂಬ ಅಂದಾಜು ಮಾಡಬಹುದು. ಈ ಮಹತ್ವಕ್ಕೆ ಕಾರಣ ಹಣ ಅಂದರೆ ಅತಿಶಯೋಕ್ತಿ ಅಲ್ಲ.
ನಾಡ ರಕ್ಷಣೆಗಾಗಿ (!!??) ನಡಿಗೆ ಹೊರಟಿರುವ ಕಾಂಗ್ರೆಸ್ಸಿಗರ ಬೆಂಬಲಕ್ಕೆ ನಮ್ಮ ಈ ಸಾಹಿತಿಗಳು ಟೊಂಕ ಕಟ್ಟಿ ನಿಂತಿದ್ದಾರೆ. ಸ್ವಾಮೀ ಸಾಹಿತಿಗಳೇ ಸ್ವಲ್ಪ ಯೋಚಿಸಿನೋಡಿ ನಮ್ಮ ನಾಡನ್ನು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಆಳಿದ ಇವರು ಎಷ್ಟರ ಮಟ್ಟಿಗೆ ನಾಡ ರಕ್ಷಣೆ ಮಾಡಿದ್ದಾರೆ? ಇಲ್ಲಿ ನನಗೆ ಬಿಜೆಪಿ ಬೆಂಬಲಿಸಿ ಮಾತನಾಡುವ ಹಂಬಲ ಇಲ್ಲ. ದುಡ್ಡು ಬಾಚುವ ವಿಷಯದಲ್ಲಿ ಪ್ರಸ್ತುತದ ರಾಜಕಾರಣಿಗಳು ನಾ ಮುಂದು ತಾ ಮುಂದು ಎಂದು ಮುನ್ನುಗ್ಗುತ್ತಾರೆ. ಹೀಗಿರುವಾಗ ಇವರಿಂದ ನಾಡ ರಕ್ಷಣೆ ಹೇಗೆ ಸಾಧ್ಯ!!!??? ನಿಮ್ಮಗಳ (ಸಾಹಿತಿಗಳ) ಬಗ್ಗೆ ಕನ್ನಡಿಗರಿಗೆ ಅಪಾರ ಗೌರವವಿದೆ. ದಯಮಾಡಿ ಅದಕ್ಕೆ ಧಕ್ಕೆ ತರಬೇಡಿ.... ಸಾಹಿತ್ಯ ಕೃಷಿಯಲ್ಲಿ ತೊಡಗಿ ನಮ್ಮ ನಾಡಿನ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿ ಎಂದು ಸಮಸ್ತ ಕನ್ನಡಿಗರ ಪರವಾಗಿ ಕೋರುವ

ವಿಜಯ್ ಹೆರಗು

ಸೋಮವಾರ, ಜುಲೈ 26, 2010

ಬರೆಯುವ ಮುನ್ನ

ಪ್ರಿಯ ಗೆಳೆಯರೇ,
ನನ್ನ ಈ ಹೊಸ ವರಸೆಗೆ ಸ್ಪೂರ್ತಿಯಾದದ್ದು ಗೆಳೆಯ ವಿನಯ್. ಅವನು ಈಗ ದೂರದ ದುಬೈನಲ್ಲಿ ನೆಲೆಸಿದ್ದಾನೆ. ಕೆಲವು ತಿಂಗಳುಗಳ ಮೊದಲು ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಬೆಂಗಳೂರಲ್ಲಿ. ಪಾಪ ಈಗ ಮರಳುಗಾಡಿನ ಬಿಸಿಲಲ್ಲಿ ಮೈ ಕಾಯಿಸುತ್ತಿದ್ದಾನೆ. ಅವನು ಬರೆದ ಬ್ಲಾಗು ಓದಿ ಹೊಟ್ಟೆಕಿಚ್ಚು ಹೆಚ್ಚಿ ನಾನೂ ಬರೆಯೋಕೆ ಶುರು ಮಾಡಿದೆ. ಇನ್ನು ನನ್ನ ಅನಿಸಿಕೆಗಳು, ಮನದ ಮಾತುಗಳು, ಕವಿತೆ ಸಾಲುಗಳು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬರೆಯುವ ಆಸೆ ನನ್ನದು.....ಓದುವ ಕಷ್ಟ ನಿಮ್ಮದು.....ನಿಮ್ಮ ಅಭಿಪ್ರಾಯಗಳು, ಟೀಕೆಗಳು, ವಿಮರ್ಶೆಗಳಿಗೆ ಸದಾ ಸ್ವಾಗತ ....ಇದು ಬರೀ ಸ್ವಗತ....ಮುಂದೈತೆ ಮಾರಿಹಬ್ಬ....