ಶುಕ್ರವಾರ, ಜನವರಿ 10, 2014

ಬುದ್ಧಿ ಕೊಟ್ಟ ಬುದ್ಧ - ಸಣ್ಣ ಕತೆ

ಮೊನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಯ ಸಮಯ.  ನಾನು ಟಿನ್ ಫ್ಯಾಕ್ಟರಿಯಿಂದ ಬಸ್ಸಲ್ಲಿ ಹೆಬ್ಬಾಳದ ಕಡೆಗೆ ಬರ್ತಿದ್ದೆ . ಬಸ್ಸು ನಾಗವಾರದ ಸಿಗ್ನಲ್ ದಾಟಿ ಮುಂದೆ ಬಂದಿತ್ತು . ನನಗೆ ಸಣ್ಣಗೆ ತೂಕಡಿಕೆ ಬಂದಿತ್ತು . ಬೈಕಿನವನ್ಯಾರೋ ಅಡ್ಡ ನುಗ್ಗಿದ ಅಂತ ಡ್ರೈವರ್ ಸಡನ್ನಾಗಿ ಬ್ರೇಕ್ ಹಾಕಿದ.ನಿದ್ದೆಯಿಂದ ಎದ್ದ ನಾನು ಹಾಗೇ ಕಿಟಕಿಯ ಕಡೆ ಕಣ್ಣು ಹಾಯಿಸಿದೆ . ದೇವರ ವಿಗ್ರಹಗಳು , ತುಳಸಿ ಕಟ್ಟೆಗಳನ್ನು ತಯಾರಿಸುವ ಅಂಗಡಿಯ ಮುಂದೆ ಬುದ್ಧನ ವಿಗ್ರಹವೊಂದು ನನ್ನ ಕಡೆ ನೋಡಿ ನಗುತ್ತಿತ್ತು . ಅಷ್ಟರಲ್ಲಿ ಬಸ್ ಮುಂದೆ ಹೊರಟಿತ್ತು. ಬುದ್ಧ ನನ್ನನ್ನು ಆವರಿಸಿದ್ದ. ಆ ನಿಷ್ಕಲ್ಮಶ ನಗು, ಆ ತೇಜಸ್ಸು ಕಂಡು ಒಂದು ಕ್ಷಣ ಬಸ್ಸನ್ನು ಅಲ್ಲಿಯೇ ನಿಲ್ಲಿಸಿ ಇಳಿದು ಬುದ್ಧನ ಬಳಿ ಓಡಬೇಕು ಅನ್ನಿಸಿತು . ಈ ಕ್ಷಣವೇ ಆ ವಿಗ್ರಹ ಕೊಂಡುಕೊಳ್ಳಬೇಕು ಅಂತ ಆಸೆಯಾಯ್ತು. ಬೆಲೆ ಒಂದಕ್ಕೆ ಎರಡಾದರೂ ಸರಿ ತಗೊಂಡೇಬಿಡಬೇಕು ಅಂತ ನಿರ್ಧಾರ ಮಾಡಿದೆ .

ಅಷ್ಟರಲ್ಲಿ .....................................................................
.................................................................
..................................................
"ಆಸೆಯೇ ದುಃಖಕ್ಕೆ ಮೂಲ " ಅನ್ನೋ ಬುದ್ಧನ ಮಾತು ನೆನಪಾಗಿ ಜ್ಞಾನೋದಯವಾಯ್ತು . ತೆಪ್ಪಗೆ ಮನೆ ಕಡೆ ಹೊರಟೆ .
ಚಿತ್ರ ಕೃಪೆ : ಅಂತರ್ಜಾಲ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ