ಮಂಗಳವಾರ, ಏಪ್ರಿಲ್ 1, 2014

ಎಲೆಕ್ಷನ್ ಹನಿಗಳು


ರಾತ್ರಿ ಹನ್ನೆರಡಾದರೂ ಮಹಿಳೆ
ಒಬ್ಬಳೇ ಓಡಾಡಿದರೆ ಅದು ರಾಮರಾಜ್ಯ
ರಾತ್ರಿ ಒಂದಾದರೂ ಬಾರಿನ ಬಾಗಿಲು
ತೆರೆದೇ ಇದ್ದರೆ ಅದು " ಸಿದ್ರಾಮ" ರಾಜ್ಯ

----------------------------------


ಗೆಲ್ಲಲಿ ಮೋದಿ
ಗೆಲ್ಲಲಿ ರಾಹುಲ್ ಗಾಂಧಿ
ನಮಗೆ ಬೇಕಾಗಿರೋದು ಗಾದಿ
ಮತ್ತು ನೋಟಲ್ಲಿರೋ ಗಾಂಧೀ
ಅಂತಿದ್ದಾರೆ ಗೆದ್ದೆತ್ತಿನ ಬಾಲ ಹಿಡಿಯೋ ಮಂದಿ
------------------------
ಕನಕಪುರದಲ್ಲಿ ಕುಮಾರಣ್ಣ
ಇಟ್ಟರು ಕಣ್ಣೀರು
ಆಗಬಹುದೇ ಚಿಕ್ಕಬಳ್ಳಾಪುರದಲ್ಲಿ
ಪನ್ನೀರು !!??
-------------------------
ಐದು ವರ್ಷದ ಬಳಿಕ
ಮತ್ತೆ ಬಂದಿಹರು ಮಾಡಲೆಂದು
ಮತಯಾಚನೆ
ಮತ ನೀಡುವ ಮುನ್ನ
ಒಮ್ಮೆ ಸರಿಯಾಗಿ
ಮಾಡಿ ಯೋಚನೆ