ಬುಧವಾರ, ಫೆಬ್ರವರಿ 6, 2013

"ಸಹಬಾಳ್ವೆ - ಸಿಹಿಬಾಳ್ವೆ"


ಇಂದೇಕೋ ಕುವೆಂಪು ಬಹಳವಾಗಿ ಕಾಡುತ್ತಿದ್ದಾರೆ.
 ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!


 "ಮನುಜ ಮತ ವಿಶ್ವಪಥ" ಎಂದು ಜಗತ್ತಿಗೆ ಸಾರಿಹೇಳಿದ ಆ ಹಿರಿಯ ಜೀವಕ್ಕೆ ನಮೋನ್ನಮಃ. ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುತ್ತಾ, ತಮ್ಮ ಪಾಡಿಗೆ ತಾವಿರುವ ಜನರನ್ನು ಉದ್ರಿಕ್ತಗೊಳಿಸಿ ಅವರನ್ನು ಮುಂದೆ ಬಿಟ್ಟು ಹಿಂದೆ ನಿಂತು ತಮಾಷೆ ನೋಡುವ ಓವೈಸಿ, ತೊಗಾಡಿಯ, ಮುತಾಲಿಕ್ ರಂತಹ ಮತಾಂಧರಿಗೆ ಇಂದು ಕುವೆಂಪುರವರ ಈ ವಿಶ್ವಮಾನವ ಸಂದೇಶವನ್ನು ಅರ್ಥಮಾಡಿಸಬೇಕಿದೆ. ಇಲ್ಲದಿದ್ದರೆ ಇಂತಹ ಮತ್ತಷ್ಟು ವಿಷಜಂತುಗಳು ಹುಟ್ಟಿಕೊಂಡು ಸಮಾಜದ ನೆಮ್ಮದಿಯನ್ನು ಹಾಳುಗೆಡವುತ್ತವೆ.

ಎಲ್ಲೋ ಹುಡುಕಿದೆ ಇಲ್ಲದ ದೇವರ
 ಕಲ್ಲು ಮಣ್ಣುಗಳ ಗುಡಿಯೊಳಗೆ
 ಇಲ್ಲೇ ಇರುವ ಪ್ರೀತಿ ಸ್ನೇಹಗಳ
 ಗುರುತಿಸದಾದೆವು ನಮ್ಮೊಳಗೆ



ಎಂಬ ಕವಿ ಗೋಪಾಲಕೃಷ್ಣ ಅಡಿಗರ ಆಶಯದಂತೆ ಬದುಕೋಣ. "ಸಹಬಾಳ್ವೆ - ಸಿಹಿಬಾಳ್ವೆ" ಎಂದು ಜಗತ್ತಿಗೆ ಸಾರಿಹೇಳೋಣ