ಸೋಮವಾರ, ಜುಲೈ 26, 2010

ಬರೆಯುವ ಮುನ್ನ

ಪ್ರಿಯ ಗೆಳೆಯರೇ,
ನನ್ನ ಈ ಹೊಸ ವರಸೆಗೆ ಸ್ಪೂರ್ತಿಯಾದದ್ದು ಗೆಳೆಯ ವಿನಯ್. ಅವನು ಈಗ ದೂರದ ದುಬೈನಲ್ಲಿ ನೆಲೆಸಿದ್ದಾನೆ. ಕೆಲವು ತಿಂಗಳುಗಳ ಮೊದಲು ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಬೆಂಗಳೂರಲ್ಲಿ. ಪಾಪ ಈಗ ಮರಳುಗಾಡಿನ ಬಿಸಿಲಲ್ಲಿ ಮೈ ಕಾಯಿಸುತ್ತಿದ್ದಾನೆ. ಅವನು ಬರೆದ ಬ್ಲಾಗು ಓದಿ ಹೊಟ್ಟೆಕಿಚ್ಚು ಹೆಚ್ಚಿ ನಾನೂ ಬರೆಯೋಕೆ ಶುರು ಮಾಡಿದೆ. ಇನ್ನು ನನ್ನ ಅನಿಸಿಕೆಗಳು, ಮನದ ಮಾತುಗಳು, ಕವಿತೆ ಸಾಲುಗಳು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಬರೆಯುವ ಆಸೆ ನನ್ನದು.....ಓದುವ ಕಷ್ಟ ನಿಮ್ಮದು.....ನಿಮ್ಮ ಅಭಿಪ್ರಾಯಗಳು, ಟೀಕೆಗಳು, ವಿಮರ್ಶೆಗಳಿಗೆ ಸದಾ ಸ್ವಾಗತ ....ಇದು ಬರೀ ಸ್ವಗತ....ಮುಂದೈತೆ ಮಾರಿಹಬ್ಬ....

2 ಕಾಮೆಂಟ್‌ಗಳು: