ಶನಿವಾರ, ಆಗಸ್ಟ್ 7, 2010

ಸ್ವತಂತ್ರ- ಅತಂತ್ರ


ಬಂದು ನಿಂತಿದೆ ಮತ್ತೊಂದು ಆಗಸ್ಟ್ ಹದಿನೈದು
ನೆನಪು ಮಾಡಿಸುತಿದೆ ನಮ್ಮದು ಸ್ವತಂತ್ರ ನಾಡೆಂದು
ಮರೆತು ಹೋಗಿದೆ ನಮಗೆ ನಮ್ಮ ಹಿರಿಯರ ಹೋರಾಟದ ಬದುಕು
ನಮಗೆ ನಮ್ಮದೇ ನೂರಾರು ಚಿಂತೆ-ವ್ಯಥೆ


ಹೆಸರಿಗಷ್ಟೇ ಸ್ವಾತಂತ್ರ್ಯ ಇಂದಿಗೂ ನಾವು ಗುಲಾಮರೇ
ಹಿಡಿ ಅನ್ನಕ್ಕಾಗಿ, ಉಡು ಬಟ್ಟೆಗಾಗಿ ನಿಲ್ಲದ ಆಕ್ರಂದನ
ನೋಟು ಕೊಟ್ಟು ಓಟು ಪಡೆದು ನಮ್ಮನಾಳುವ ದೊರೆಗಳೇ
ನಿಮಗಿಂತ ಆ ಬ್ರಿಟಿಷರೇ ನೂರು ಪಟ್ಟು ಮಿಗಿಲು


ದಯಮಾಡಿ ನಮಗಿನ್ನು ಕೊಟ್ಟುಬಿಡಿ ಸ್ವಾತಂತ್ರ್ಯ
ಸಾಕಾಗಿದೆ ನಮಗೆ ಗುಲಾಮಗಿರಿಯ ಬದುಕು
ದುಡ್ಡು ಮಾಡಿದ್ದು,ಸುಳ್ಳು ಹೇಳಿದ್ದು ಸಾಕುಮಾಡಿ
ಬಡಜನರ ಬದುಕಿಗೆ ಬುಡ್ಡಿ ದೀಪದಷ್ಟಾದರೂ ಬೆಳಕು ನೀಡಿ


2 ಕಾಮೆಂಟ್‌ಗಳು: